ನೀರಾ ರಾಡಿಯಾ ಮತ್ತು ವೃತ್ತಿಪರ ಲಾಬಿಗಾರರು ರಾಜಕಾರಣಿಗಳು, ಕಾರ್ಪೋರೇಟ್ಸ್ ಮತ್ತು ಉದ್ದಿಮೆದಾರರು, ಅಧಿಕಾರಿಗಳು, ಇಲಾಖಾಧಿಕಾರಿಗಳು, ಬೆಂಬಲಿಗರು ಮತ್ತು ಪತ್ರಕರ್ತರ ನಡುವಿನ ದೂರವಾಣಿ ಸಂಭಾಷಣೆಯುನ್ನು ೨೦೦೮-೦೯ರಲ್ಲಿ ಭಾರತೀಯ ವರಮಾನ ತೆರಿಗೆ ಇಲಾಖೆಯು ಧ್ವನಿಮುದ್ರಣ ಮಾಡಿ ಬಿಡುಗಡೆ ಮಾಡಿರುವುದೇ ರಾಡಿಯಾ ಧ್ವನಿಮುದ್ರಣ ಹಗರಣ . ೨ಜಿ ಸ್ಪೆಕ್ಟ್ರಮ್ ಹಗರಣ ಯೋಜನೆಯ ಜೊತೆಗೆ ಇತರೆ ಅಪರಾಧಿ ಚಟುವಟಿಕೆಗಳ ಕುರಿತಾಗಿನ ಈ ಕರೆಯ ಸಾಕ್ಷಿಗಳು ಸರ್ಕಾರ ಮತ್ತು ಸಾರ್ವಜನಿಕ ಆರೋಪಕ್ಕೊಳಗಾಗಿದೆ. ನೀರಾ ರಾಡಿಯಾ ವೈಷ್ಣವಿ ಕಾರ್ಪೋರೇಟ್ ಕಮ್ಯೂನಿಕೇಶನ್ಸ್ ಎಂಬ ಸಾರ್ವಜನಿಕ ಸಂಪರ್ಕ ವ್ಯವಹಾರ ಸಂಸ್ಥೆ ಮತ್ತು ನ್ಯೂಕಾಮ್, ನೋಯಿಸಿಸ್ ಸ್ಟ್ರೇಟೆಜಿಕ್ ಕನ್ಸಲ್ಟಿಂಗ್ ಸರ್ವೀಸಸ್ ಮತ್ತು ವಿಟ್ಕಾಮ್ ಕನ್ಸಲ್ಟಿಂಗ್‌‍ಗಳಂತಹ ಸಹಕಾರಿಗಳ ಮೂಲಕ ಕೆಲಸ ನಿರ್ವಹಿಸುತ್ತಿದ್ದರು. ರತನ್ ಟಾಟಾರ ಟಾಟಾ ಗ್ರೂಪ್‌, ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಪ್ರಣಯ್ ರಾಯ್‌ರ ಎನ್‌ಡಿಟಿವಿ ಮತ್ತು ಇತರೆ ಕಂಪನಿಗಳು ಇವರ ಗ್ರಾಹಕರಾಗಿದ್ದರು. == ರಾಡಿಯಾ ಧ್ವನಿಮುದ್ರಣ == ನೀರಾ ರಾಡಿಯಾರ ದೊಡ್ಡ ಪ್ರಮಾಣದ ಕಪ್ಪುಹಣವನ್ನು- ಬಿಳಿಮಾಡುವಿಕೆ, ತೆರಿಗೆ ತಪ್ಪಿಸಿಕೊಳ್ಳುವಿಕೆ, ಮತ್ತು ಹಣಕಾಸು ಭ್ರಷ್ಟಾಚಾರಗಳನ್ನು ತನಿಖೆಗೊಳಪಡಿಸುವ ದೃಷ್ಟಿಯಿಂದ ೨೦೦೮-೨೦೦೯ರಲ್ಲಿ ಗೃಹ ಸಚಿವಾಲಯದಿಂದ ಅಧಿಕಾರ ಪತ್ರ ಪಡೆದ ನಂತರ ಭಾರತೀಯ ವರಮಾನ ತೆರಿಗೆ ಇಲಾಖೆ ೩೦೦ ದಿನಗಳ ಕಾಲ ರಾಡಿಯಾರ ದೂರವಾಣಿ ಸಂಭಾಷಣೆಯನ್ನು ಧ್ವನಿಮುದ್ರಿಸಿಕೊಂಡಿತು. ನವೆಂಬರ್ ೧೬, ೨೦೦೭ರಂದು ನೀರಾ ರಾಡಿಯಾ ವಿರುದ್ಧ ಹಣಕಾಸು ಸಚಿವಾಲಯದಲ್ಲಿ ದೂರು ದಾಖಲಾದ ಎಂಟು ತಿಂಗಳ ನಂತರದಲ್ಲಿ ಧ್ವನಿಮುದ್ರಿಸಲು ಆದೇಶಿಸಲಾಗಿತ್ತು ಎಂದು ೨೦೧೦ ಡಿಸೆಂಬರ್‌ಗಿಂತ ಮೊದಲಿಗೆ ವರಮಾನ ತೆರಿಗೆ ಇಲಾಖೆ ಮತ್ತು ಭಾರತ ಕೇಂದ್ರ ಸರ್ಕಾರ ಜೊತೆಯಾಗಿ ಭಾರತೀಯ ಸರ್ವೋಚ್ಛ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದವು. ರಿಲಯನ್ಸ್ ಕಮ್ಯೂನಿಕೇಶನ್ಸ್ ನಲ್ಲಿ ಕಾರ್ಪೋರೇಟ್ ಕಮ್ಯೂನಿಕೇಶನ್‌ನ ಉಪಾಧ್ಯಕ್ಷರಾದ ಗೌರವ್ ವಾಹಿ ಮತ್ತು ರಾಡಿಯಾ ಒಡೆತನದ ವೈಷ್ಣವಿ ಕಾರ್ಪೋರೇಟ್ ಕಮ್ಯೂನಿಕೇಶನ್ಸ್‌ನಲ್ಲಿ ಕೆಲಸಮಾಡುತ್ತಿದ್ದ ಮಾಜಿ ಕೆಲಸಗಾರ್ತಿ(ನಿರ್ದೇಶಕಿ) ರಶ್ಮಿ ನಾಯಕ್ ಜೊತೆಯಾಗಿ ಒಂದು ಪತ್ರ ಬರೆದು ಆರೋಪ ಮಾಡಿದ್ದರು. ನೀರಾ ರಾಡಿಯಾದ ವಿರುದ್ಧ ಬಂದ ದೂರಿನ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆಯ ಡೈರಕ್ಟರೇಟ್ ಜನರಲ್ (ತನಿಖಾದಳ) ಅಗಸ್ಟ್ ೨೦೦೮ರಲ್ಲಿ ರಾಡಿಯಾರ ದೂರವಾಣಿಯ ಮೇಲೆ ನಿಗಾ ಇಡಲು ಆದೇಶಿಸಿತ್ತು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ. ಡಿಸೆಂಬರ್ ೧೭, ೨೦೧೦ ರಾಡಿಯಾರ ವೈಷ್ಣವಿ ಕಾರ್ಪೋರೇಟ್ ಕಮ್ಯೂನಿಕೇಶನ್ಸ್ ವಕ್ತಾರ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿ ಹೇಳಿದರು; "ತಮ್ಮ ಕಂಪನಿಯಲ್ಲಿ ಈಗ ಅಥವಾ ಮಾಜಿ ಕೆಲಸಗಾರರು ಯಾವುದೇ ಸರ್ಕಾರಕ್ಕೆ ಅಥವಾ ತನಿಖಾದಳಕ್ಕೆ ನಮ್ಮ ಕಾರ್ಯಾಚರಣೆಯ ಮೇಲೆ ಅಥವಾ ಅಧ್ಯಕ್ಷರ ಮೇಲೆ ದೂರು ಸಲ್ಲಿಸಿದ್ದಾರೆ ಎಂದು ನಾವು ನಂಬುವುದಿಲ್ಲ." ದಿ ಪಯೋನಿಯರ್ ಪತ್ರಿಕೆಯ ತನಿಖಾ ಪತ್ರಕರ್ತ ಜೆ. ಗೋಪಿಕೃಷ್ಣನ್ ನೀರಾ ರಾಡಿಯಾ ಮತ್ತು ಎ.ರಾಜಾ ಜೊತೆಯಾಗಿ ೨ಜಿ ಸ್ಪೆಕ್ಟ್ರಮ್ ಹಗರಣದಲ್ಲಿ ಭಾಗಿಯಾದ ಕುರಿತಾಗಿ ದೂರವಾಣಿ ಸಂಭಾಷಣೆಯ ದೂರವಾಣಿ ಧ್ವನಿ ಮುದ್ರಣವನ್ನು ಮೊದಲು ಮುಖ್ಯ ವಾಹಿನಿ ಮಾಧ್ಯಮಗಳಿಗೆ ವರದಿ ಮಾಡಿದರು. ಏಪ್ರಿಲ್ ೨೮, ೨೦೧೦ರಂದು ದಿ ಪಯೋನಿಯರ್ ಪತ್ರಿಕೆಯಲ್ಲಿ "ಟ್ಯಾಪ್ಡ್ ಆ‍ಯ್‌೦ಡ್ ಟ್ರ್ಯಾಪ್ಡ್" ಹೆಸರಿನ ಶೀರ್ಷಿಕೆಯೊಂದಿಗೆ ವರದಿಯಾಯಿತು. ನೀರಾ ರಾಡಿಯಾ ನ್ಯಾಯಪೂರ್ವಕ ನೋಟೀಸ್‌ನೊಂದಿಗೆ ಪ್ರತಿಕ್ರಿಯಿಸಿ ದಿ ಪಯೋನಿಯರ್ ಪತ್ರಿಕೆಯು “ಒಂದು ಸಂಪೂರ್ಣವಾದ ಹಾಗು ಸ್ಪಷ್ಟವಾದ ವರದಿಯನ್ನು ಪ್ರಕಟಿಸಿ ಅದರಲ್ಲಿ ತಾವು ಬರೆದದ್ದನ್ನು ಸಾರ್ವಜನಿಕವಾಗಿ ಹಿಂಪಡೆಯಬೇಕು ಮತ್ತು ನಾವು ಒಪ್ಪುವ ರೀತಿಯಲ್ಲಿ ಕ್ಷಮೆಯಾಚಿಸಿ ಅದನ್ನು ಪ್ರಮುಖವಾಗಿ ಹಾಗೂ ಗಮನಾರ್ಹವಾಗಿರುವಂತೆ ಪತ್ರಿಕೆಯ ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಬೇಕು" ಎಂದು ಹೇಳಿದರು. ಬದಾಸ್೪ಮೀಡಿಯಾ ಎಂಬ ಹಿಂದಿ ವೆಬ್ ಪೋರ್ಟಲ್ ಮೇ ೨೦೧೦ರ ಮೇ ೭, ೨೦೧೦ರಂದು ಈ ವಿಷಯವನ್ನು ತೆಗೆದುಕೊಂಡು ಪ್ರಕಟಿಸಿತು ಮತ್ತು ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಮಾಹಿತಿಗಾಗಿ ವಿನಂತಿಸಿಕೊಂಡಿತು. ನವೆಂಬರ್ ೨೦೧೦ರಲ್ಲಿ, ಓಪನ್ ಮ್ಯಾಗಜೀನ್ ನೀರಾ ರಾಡಿಯಾ ಜೊತೆಗೆ ಹಿರಿಯ ಪತ್ರಕರ್ತರು ರಾಜಕಾರಣಿಗಳು, ಮತ್ತು ಕಾರ್ಪೊರೇಟ್ ಸಂಸ್ಥೆಗಳು, ಆರೋಪವನ್ನು ಅಲ್ಲಗಳೆದ ಹಲವಾರು ಜನರ ನಡುವಿನ ಕೆಲವು ದೂರವಾಣಿ ಮಾತುಕತೆಗಳ ನಕಲನ್ನು ವರದಿ ಮಾಡಿತು. ಕೇಂದ್ರೀಯ ತನಿಖಾ ದಳ ರಾಡಿಯಾ ೨ಜಿ ಸ್ಪೆಕ್ಟ್ರಮ್ ಹಗರಣದಲ್ಲಿ ಸಂಬಂಧ ಹೊಂದಿರುವ ಕುರಿತಾಗಿ ೫,೮೫೧ ದೂರವಾಣಿ ಸಂಭಾಷಣೆಗಳ ದಾಖಲೆ ಹೊಂದಿರುವುದಾಗಿ ಪ್ರಕಟಿಸಿತು. ನವೆಂಬರ್ ೨೯, ೨೦೧೦ರಂದು ಔಟ್‌ಲುಕ್ ಮ್ಯಾಗಜೀನ್ ಮುಖಪುಟ ವರದಿ ಪ್ರಕಟಿಸಿ ರಾಡಿಯಾ ಧ್ವನಿಮುದ್ರಣದ ನಕಲುಗಳನ್ನು ಪ್ರಕಟಿಸಿ ಈ ರೀತಿಯಾಗಿ ವ್ಯಾಖ್ಯಾನಿಸಿತು: "ಇಂಡಿಯಾ, ದ ರಿಪಬ್ಲಿಕ್, ಈಸ್ ನೌ ಆನ್ ಸೇಲ್. ಈ ಹರಾಜಿನಲ್ಲಿ ಹೆಸರಾಂತ ವ್ಯಕ್ತಿಗಳು, ಕಾರ್ಪೊರೇಟ್ ಸಂಸ್ಥೆಗಳು, ಲಾಬಿ ಮಾಡುವವರು, ಅಧಿಕಾರಿಗಳು ಮತ್ತು ಪತ್ರಿಕೋದ್ಯಮಿಗಳೂ ಸಹಾ ಸೇರಿದ್ದಾರೆ..... ರಾಡಿಯಾಳ ಈ ಸಂಭಾಷಣೆಗಳು ಹೇಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಗಳನ್ನೂ ಮಿತಜನತಂತ್ರ ಹೇಗೆ ನಿರ್ಧರಿಸುತ್ತದೆ ಎನ್ನುವುದನ್ನು ವಿವರಿಸುತ್ತವೆ...... ಕ್ಯಾಬಿನೆಟ್ ಸ್ಥಾನದಿಂದ ಹಿಡಿದು ನೈಸರ್ಗಿಕ ಸಂಪನ್ಮೂಲಗಳೂ ಹೇಗೆ ಬೆಲೆ ನೀಡಿದರೆ ಸಿಕ್ಕಿಬಿಡುತ್ತವೆ ಎಂಬುದರ ಮಂಕಾದ ಚಿತ್ರಣವನ್ನು ಈ ಧ್ವನಿಮುದ್ರಣಗಳು ನೀಡುತ್ತವೆ. ಸಧ್ಯದ ವಿವಾದವಾದ ೨ಜಿ ಹಂಚಿಕೆಯು ಉನ್ನತ ಸ್ಥಾನಗಳಲ್ಲಿ ಉಂಟಾಗುವ ಅನೇಕ ಲಾಬಿಗಳಲ್ಲಿ ಒಂದಾಗಿದ್ದು, ಅವುಗಳ ಸ್ವರೂಪವನ್ನು ಇದು ತೋರಿಸುತ್ತದೆ. " ಕಾರ್ಪೊರೇಟ್ ಅಧಿಕಾರಿಗಳು, ದೂರವಾಣಿ ಸಂಭಾಷಣೆಗಳ ಸಾಕ್ಷಿಯಿಂದ ಪ್ರಭಾವ ಬೀರುವುದರ ಕುರಿತಾಗಿ ವಿಷಯ ಬಹಿರಂಗ ಪಡಿಸಿರುವುದರಿಂದ ಭಾರತೀಯ ಸರ್ವೋಚ್ಛ ನ್ಯಾಯಾಲಯ ಬೆಚ್ಚಿ ಬಿದ್ದಿದೆ. ಸರ್ವೋಚ್ಛ ನ್ಯಾಯಾಲಯ: "ನಾವು ಪವಿತ್ರವಾದ ಗಂಗಾ ನದಿ ಮಾಲಿನ್ಯವಾಗಿರುವುದರ ಕುರಿತಾಗಿ ಮಾತನಾಡುತ್ತೇವೆ. ಈ ಮಾಲಿನ್ಯವು ಕಂಗೆಡಿಸುವಂತದ್ದಾಗಿದೆ." ಎನ್‌ಜಿಓ ಸಾರ್ವಜನಿಕ ಹಿತಾಸಕ್ತಿ ವ್ಯಾಜ್ಯ ಮಂಡಳಿಯು (ಸಿಪಿಐಎಲ್) ವಕೀಲ ಪ್ರಶಾಂತ್ ಭೂಷಣ್ ಅವರು ರಾಡಿಯಾರ ಎಲ್ಲಾ ಧ್ವನಿಮುದ್ರಣಗಳನ್ನು ಸಾರ್ವಜನಿಕಗೊಳಿಸುವಂತೆ ಕೇಳಿ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ರಾಡಿಯಾರ ಧ್ವನಿಮುದ್ರಣಗಳು "ಸರಕಾರದ ತೀರ್ಮಾನಗಳು, ಪಾಲಿಸಿಗಳು, ಚರ್ಚೆಗಳನ್ನು ಮತ್ತು ಸಂಸತ್ತಿನಲ್ಲಿ ಕಾನೂನು ಮಾಡುವುದು ಎಲ್ಲವನ್ನೂ ಹೇಗೆ ತಲೆಕೆಳಗು ಮಾಡಲಾಗುತ್ತದೆ ಎಂಬುದನ್ನು ತೋರಿಸಿವೆ. ಮಾಧ್ಯಮದಲ್ಲಿ ವಸ್ತು ಸ್ಥಿತಿಯ-ವರ್ಣನೆಯ ವಿಷಯಗಳು, ಪ್ರಭಾವಶಾಲಿ ಕಾರ್ಪೊರೇಟ್‌ಗಳು ತಮ್ಮ ವಾಣಿಜ್ಯಿಕ ಆಸಕ್ತಿಗಳನ್ನು ಯಶಸ್ವಿಯಾಗಿ ಸಾಧಿಸಲು ಲಾಬಿದಾರರಿಗೆ/ಬ್ರೋಕರ್‌ಗಳಿಗೆ/ಫಿಕ್ಸರ‍್ಗಳಿಗೆ ಹಣ ನೀಡಿ ಸಂಸತ್ತಿನಲ್ಲಿ ಕಾನೂನು ರೂಪಿಸುವುದನ್ನು ರಾಡಿಯಾರ ಧ್ವನಿಮುದ್ರಣವು ತೋರಿಸುತ್ತದೆ ಎಂದು ಹೇಳಿದ್ದಾರೆ. ಸಾರ್ವಜನಿಕವಾಗಿ ಸ್ವಾಮ್ಯದಲ್ಲಿರುವ ಈ ಮುದ್ರಿತ ಸಂಭಾಷಣೆಗಳಲ್ಲಿ ಅನೇಕ ಪ್ರಮುಖ ವ್ಯಕ್ತಿಗಳು ಮಾತನಾಡಿದ್ದಾರೆ: ==== ರಾಜಕಾರಣಿಗಳು ==== ಎ.ರಾಜಾ, ಮಾಜಿ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕನಿಮೋಳಿ, ರಾಜ್ಯ ಸಭಾ ಸದಸ್ಯೆ ಎನ್.ಕೆ.ಸಿಂಗ್, ರಾಜ್ಯ ಸಭಾ ಸದಸ್ಯ ಅನು ಟಂಡನ್, ಲೋಕ ಸಭಾ ಸದಸ್ಯ ಪೂಂಗೋತಾಯ್ ಅಲಾಡಿ ಅರುಣಾ ತಮಿಳುನಾಡಿನ ಮಾಹಿತಿ ತಂತ್ರಜ್ಞಾನ ಸಚಿವೆ,ಡಿಎಂಕೆ (ಉಲ್ಲೇಖಿಸಿದ) "ಪಿಎಂ","ಪಿಎಂಒ" (ಪ್ರಧಾನಿ, ಪ್ರಧಾನಿ ಸಚಿವಾಲಯ) (ಉಲ್ಲೇಖಿಸಿದ) "(೭)ಆರ್‌ಸಿಆರ್" (೭, ರೇಸ್‌ ಕೋರ್ಸ್ ರೋಡ್), ಭಾರತದ ಪ್ರಧಾನ ಮಂತ್ರಿಗಳ ಅಧೀಕೃತ ನಿವಾಸ ಮತ್ತು ಪ್ರಧಾನ ಕಾರ್ಯ ಸ್ಥಳ (ಉಲ್ಲೇಖಿಸಿದ) "ಎಸ್.ಜಿ" ಸೋನಿಯಾ ಗಾಂಧಿ, , ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು (ಉಲ್ಲೇಖಿಸಿದ) ಅಹಮ್ಮದ್ ಪಟೇಲ್, ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಉಲ್ಲೇಖಿಸಿದ) ಗುಲಾಂ ನಬಿ ಆಜಾದ್, ಕೇಂದ್ರ ಆರೋಗ್ಯ ಸಚಿವ (ಉಲ್ಲೇಖಿಸಿದ) ಮುತ್ತುವೇಲ್ ಕರುಣಾನಿಧಿ, ತಮಿಳುನಾಡು ಮುಖ್ಯಮಂತ್ರಿ ==== ಉದ್ಯಮ ಮುಖ್ಯಸ್ಥರು ==== ರತನ್ ಟಾಟಾ , ಟಾಟಾ ಗ್ರೂಪ್‌ ಮುಖೇಶ್ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್ ತರುಣ್ ದಾಸ್, ಭಾರತೀಯ ಉದ್ಯಮ ಒಕ್ಕೂಟದ (ಸಿಐಸಿ) ಮಾಜಿ ಮುಖ್ಯಸ್ಥರು ನೋಯಲ್ ಟಾಟಾ, ಟಾಟಾ ಗ್ರೂಪ್‌ ಅಧ್ಯಕ್ಷ ರತನ್ ಟಾಟಾರ ಮಲಸಹೋದರ, ಟಾಟಾ ಇಂಟ್ರನ್ಯಾಷನಲ್ ಎಂಡಿ. ಮನೋಜ್ ಮೋದಿ, ಮುಖೇಶ್ ಅಂಬಾನಿಯ ಪ್ರಮುಖ ಸಹಾಯಕ, ರಿಲಯನ್ಸ್ ಇಂಡಸ್ಟ್ರೀಸ್ (ಉಲ್ಲೇಖಿಸಿದ) ಅನಿಲ್ ಅಂಬಾನಿ, ರಿಲಯನ್ಸ್ ಎಡಿಎಜಿ (ಉಲ್ಲೇಖಿಸಿದ) ಯುನಿಟೆಕ್ ಗ್ರೂಪ್‌, ಭಾರತದ ಎರಡನೆಯ ಅತ್ಯಂತ ದೊಡ್ಡ ಸ್ಥಿರಾಸ್ತಿ ಹೂಡಿಕೆ ಕಂಪನಿ (ಉಲ್ಲೇಖಿಸಿದ) ಸುನೀಲ್ ಮಿತ್ತಲ್, ಏರ್‌ಟೆಲ್ (ಉಲ್ಲೇಖಿಸಿದ) ಆರ್‌ಕೆ ಕೃಷ್ಣನ್ ಕುಮಾರ್, ಟಾಟಾ ರಿಯಾಲ್ಟಿ ಆ‍ಯ್‌೦ಡ್ ಇನ್‌ಫ್ರಾಸ್ಟ್ರಕ್ಚರ್, ಮತ್ತು ಟಾಟಾ ಹೌಸಿಂಗ್ ಆ‍ಯ್‌೦ಡ್ ಡೆವಲಪ್ಮೆಂಟ್ ಕಂಪನಿಯ ಅಧ್ಯಕ್ಷ ==== ಪತ್ರಕರ್ತರು ==== ವೀರ್ ಸಾಂಘ್ವಿ, ಹಿಂದೂಸ್ಥಾನ್ ಟೈಮ್ಸ್ ಸಹಾಯಕ ಸಂಪಾದಕ ನಿರ್ದೇಶಕ ಬರ್ಕಾ ದತ್, ಗ್ರೂಪ್‌ ಸಂಪಾದಕಿ, ಇಂಗ್ಲೀಷ್ ನ್ಯೂಸ್, ಎನ್‌ಡಿಟಿವಿ ಪ್ರಭು ಚಾವ್ಲಾ, ಇಂಡಿಯಾ ಟುಡೆ ಮ್ಯಾಗಜೀನ್ ಮಾಜಿ ಸಂಪಾದಕ, ಈಗ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಮುಖ್ಯ ಸಂಪಾದಕ ಶಂಕರ್ ಅಯ್ಯರ್ (ಮೊದಲು ಇಂಡಿಯಾ ಟುಡೆ ಗ್ರೂಪ್‌ನಲ್ಲಿದ್ದರು) ಜಿ.ಗಣಪತಿ ಸುಬ್ರಮಣ್ಯಮ್, ಇಕನಾಮಿಕ್ ಟೈಮ್ಸ್ ಎಂ.ಕೆ. ವೇಣು ಹಿರಿಯ ವಾಣಿಜ್ಯ ವಿಭಾಗದ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ, ಸಿಎನ್‌ಎನ್-ಐಬಿಎನ್ ರಾಜೇಂದರ್ ಪೋಚಾ, ಬಿಜಿನೆಸ್‌ವರ್ಲ್ಡ್ ಮಾಜಿ ಸಂಪಾದಕ ಮತ್ತು ಇಂಡಿ ಮೀಡಿಯಾ ಕೋ.ಪ್ರೈವೇಟ್ ಲಿಮಿಟೆಡ್‌ (ನ್ಯೂಸ್‍ಎಕ್ಸ್‍)ನ ಸಹ ಒಡೆಯ (ಉಲ್ಲೇಖಿಸಲಾದ ಹೆಸರು) ರಾಘವ್ ಬೇಹ್ಲ್, ಟಿವಿ೧೮ (ಸಿಎನ್‌ಬಿಸಿ ಟಿವಿ೧೮ ಮತ್ತು ಇದರ ಸಹಯೋಗಿ ಕಂಪನಿಗಳಾದ ಸಿಎನ್‌ಎನ್-ಐಬಿಎನ್)ವ್ಯವಸ್ಥಾಪಕ ನಿರ್ದೇಶಕ (ಉಲ್ಲೇಖಿಸಲಾದ ಹೆಸರು) ಪ್ರಣಯ್ ರಾಯ್, ನ್ಯೂಡೆಲ್ಲಿ ಟೆಲಿವಿಜನ್(ಎನ್‌ಡಿಟಿವಿ)ಯ ಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ==== ಇತರರು ==== ಸುನೀಲ್ ಅರೋರಾ, ೧೯೮೦-ಬ್ಯಾಚಿನ ಭಾರತೀಯ ನಾಗರಿಕ ಸೇವೆ (ಐಎ‌ಎಸ್) ಅಧಿಕಾರಿ ರಂಜನ್ ಭಟ್ಟಾಚಾರ್ಯ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಅಳಿಯ, ಹೋಟೆಲು ಮಾಲಿಕ, ಮತ್ತು ರಾಜಕೀಯ ಲಾಬಿದಾರ ಸುನೀಲ್ ಸೇಥ್, ನಟ, ವ್ಯವಸ್ಥಾಪಕ ಮತ್ತು ಅಂಕಣಕಾರ ಆರ್.ಕೆ ಚಂದೋಲಿಯಾ ಮಾಜಿ ದೂರಸಂಪರ್ಕ ಸಚಿವ ಎ.ರಾಜಾರ ಸೆಸಿಲಿಯಾ, ಆಪ್ತ ಸಹಾಯಕಿ ರಜತಿ ಅಮ್ಮಲ್, ಕರುಣಾನಿಧಿ ಮೂರನೇಯ ಹೆಂಡತಿ ಮತ್ತು ಡಿಎಂಕೆ,ಎಂಪಿ ಕನಿಮೋಳಿತಾಯಿ (ಉಲ್ಲೇಖಿಸಿದ) ಮಾಜಿ ಭಾರತದ ಮುಖ್ಯ ನ್ಯಾಯಮೂರ್ತಿ, ವಿಜೇಂದರ್ ಜೈನ್ (ಉಲ್ಲೇಖಿಸಿದ) ಗೋಪಾಲ್ ಸುಬ್ರಮಣಿಯಮ್, ಭಾರತದ ಸಾಲಿಸಿಟರ್ ಜನರಲ್ == ರಾಜಕೀಯ ಪ್ರಭಾವ == ಧ್ವನಿಮುದ್ರಣಗಳ ನಕಲಿ ಅಂಶಗಳ ಪ್ರಕಾರ ರಾಡಿಯಾ ದಯಾನಿಧಿ ಮಾರನ್‌ರನ್ನು ಪುನಃ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಗೆ ನಿಯೋಜಿಸುವುದರ ವಿರುದ್ಧ ಲಾಬಿ ಮಾಡಿದ್ದಾರೆ. ರಾಡಿಯಾ ಮಿಸ್ ಬರ್ಕಾ ದತ್ ಜೊತೆಗೆ ೦೯೪೮ ಐಎಸ್‌ಟಿ ಯಲ್ಲಿ ಮಾತನಾಡಿದ್ದಾರೆ. ದತ್: "(ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ) ಹೇಳಿಕೆ ಮುಂದುವರೆಯುತ್ತದೆ, ಹೌದು" ರಾಡಿಯಾ: 'ನನ್ನ ಪ್ರಾಮಾಣಿಕವಾದ ಸಲಹೆ ಏನೆಂದರೆ ನೀವು (ಕಾಂಗ್ರೆಸ್)ಗೆ ಹೇಳಿ ಅವರಿಗೆ (ಕರುಣಾನಿಧಿ) ನೇರವಾಗಿ ಹೇಳುವ ಅವಶ್ಯಕತೆ ಇದೆ...' ದತ್: ಓಕೆ ನಾನು ಮಾತನಾಡುತ್ತೇನೆ'. ನಂತರದ ೧೦೪೭ ಐಎಸ್‌ಟಿ ಸಂಭಾಷಣೆಯಲ್ಲಿ, "ಇದೊಂದು (ಕಾಂಗ್ರೆಸ್‌ಗೆ ಸಂದೇಶ ರವಾನೆ ಮಾಡುವುದು) ಸಮಸ್ಯೆ ಅಲ್ಲ ಮತ್ತು ತಾನು ಗುಲಾಂ(ನಬಿ ಆಜಾದ್) ಜೊತೆಗೆ ಮಾತನಾಡುತ್ತೇನೆ" ಎಂದು ಬರ್ಕಾ ಹೇಳುತ್ತಾರೆ. ರಾಡಿಯಾ, ರಾಜನ್ ಭಟ್ಟಾಚಾರ್ಯ ಜೊತೆಗಿನ ನಂತರದ ಸಂಭಾಷಣೆಯಲ್ಲಿ, ಇವರು ಕೂಡ ಕಾಂಗ್ರೆಸ್‌ಗೆ ಬೆಂಬಲಿಗರಾಗಿ ಕಂಡುಬರುತ್ತಿದ್ದು, ಮೇಲಿನ ಸಂಭಾಷಣೆಯನ್ನು ಉಲ್ಲೇಖಿಸಿ ಹೇಳುತ್ತಾಳೆ, "ನಾನು ಬರ್ಕಾಗೆ ಕಾಂಗ್ರೆಸ್‌ ಕರೆ ಮಾಡಲು ಹೇಳಿದ್ದೆ. ಪ್ರಧಾನಿಯವರು ಬಾಲುರವರನ್ನು ತಮ್ಮ ಸಂಪುಟದಲ್ಲಿ ಇಟ್ಟುಕೊಳ್ಳಲು ನಿಜವಾಗಿಯು ಆಸಕ್ತರಾಗಿಲ್ಲ ಎಂದು ಹೇಳಿದ್ದಾರೆಯೆ ಎಂಬುದರ ಕುರಿತು ಕಾಂಗ್ರೆಸ್‌‍ನಿಂದ ಹೇಳಿಕೆ ಪಡೆಯಲು ಆಕೆಗೆ ಕೇಳಲಾಗಿದ್ದು, ಅವರು ಈ ರೀತಿ ಹೇಳಿಲ್ಲ ಎಂಬುದನ್ನು ಬರ್ಕಾ ರವಾನಿಸಿದ್ದಾಳೆ." ರಾಡಿಯ ಮುಂದುವರೆದು ಭಟ್ಟಾಚಾರ್ಯರಿಗೆ ಹೇಳುತ್ತಾಳೆ, 'ನಿಮ್ಮ ಗೆಳೆಯ ಸುನೀಲ್ ಮಿತ್ತಲ್, ಕೂಡ ರಾಜಾ (ಮಾರನ್‌ಗೆ) ವಿರುದ್ಧವಾಗಿ ಲಾಬಿ ನಡೆಸುತ್ತಿದ್ದಾರೆ". == ಆಪಾದನೆ ಹೊಂದಿದ ಮಾಧ್ಯಮಗಳ ಸುದ್ದಿಯ ಪ್ರಸಾರ ನಿಷೇಧ ಮತ್ತು ಸಾಮಾಜಿಕ ಮಾಧ್ಯಮದಲ್ಲಿನ ಪ್ರತಿಕ್ರಿಯೆಗಳು == ಹಲವಾರು ಭಾರತೀಯ ಟಿವಿ ವಾಹಿನಿಗಳು ಮತ್ತು ವೃತ್ತಪತ್ರಿಕೆಗಳಿಂದ ಸುದ್ದಿಯ ಪ್ರಸಾರ ನಿಷೇಧ ಮಾಡಲು ಪ್ರಯಿತ್ನಿಸಿದ್ದರ ವಿರುದ್ಧ ಟ್ವಿಟ್ಟರ್ ಮತ್ತು ಫೇಸ್‌ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿಯು ಪ್ರಾಮುಖ್ಯತೆ ಪಡೆದು ಇದನ್ನು ಮಾಡದಂತೆ ಒತ್ತಡ ಹಾಕಲಾಯಿತು. ಈ ವಿಷಯವು ಬಹಿರಂಗವಾದ ನಂತರ ಭಾರತದ ಟ್ವಿಟ್ಟರ್‌ನಲ್ಲಿ ಹಲವಾರು ದಿನಗಳ ಕಾಲ #ಬರ್ಕಾಗೇಟ್ ವಿಷಯವು ನಂಬರ್ ಒನ್ ವಿಷಯವಾಗಿ ಚಾಲ್ತಿಯಲ್ಲಿತ್ತು. "ಈ ವಿಷಯದ ಮೇಲೆ ಅಂತರಾಷ್ಟ್ರೀಯ ಮಾತುಕತೆಗಳು ಏನು, ಜೊತೆಗೆ ಭಾರತೀಯ ಚದುರಿಕೆಯನ್ನು ತೂಗಿನೋಡುವಲ್ಲಿ ಟ್ವಿಟ್ಟರ್ ಮಹತ್ವದ ಪಾತ್ರ ವಹಿಸಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ". ಭಾರತದಲ್ಲಿ ಮೊದಲಿಗೆ ದಿ ಹಿಂದೂ , ಡೆಕ್ಕನ್ ಹೆರಾಲ್ಡ್ , ಇಂಡಿಯನ್ ಎಕ್ಸ್‌ಪ್ರೆಸ್ ನಂತಹ ಕೆಲವು ಮುಖ್ಯ ವೃತ್ತಪತ್ರಿಕೆಗಳು ಟೇಪ್ ಕುರಿತಾಗಿ ಮುಕ್ತವಾಗಿ ಬರೆದಿದ್ದವು. ಎಚ್‌ಟಿ ಮೀಡಿಯಾ , ಮಿಂಟ್ (ಎಚ್‌ಟಿ ಮೀಡಿಯಾ ಒಡೆತನದ ವ್ಯಾಪಾರಿ ಪತ್ರಿಕೆ) ಮತ್ತು ಎನ್‌ಡಿಟಿವಿ "ಈ ನಕಲುಗಳು ಪ್ರಾಮಾಣಿಕವಾದ್ದದ್ದೆಂದು ಖಚಿತವಾಗಿಲ್ಲ" ಎಂದು ಹೇಳಿದವು. ಸಿಎನ್‌ಎನ್-ಐಬಿಎನ್‌ಯ ಸಾಗರಿಕಾ ಗೋಸ್ ಫೇಸ್ ಆಫ್ ದ ನೇಶನ್ ಕಾರ್ಯಕ್ರಮದಲ್ಲಿ ಕಾರ್ಪೋರೇಟ್ ಲಾಬಿ ಪ್ರಜಾಪ್ರಭುತ್ವವನ್ನು ನಿಶ್ಶಕ್ತಗೊಳಿಸಿತೇ ಎಂಬ ಕುರಿತಾಗಿ ತಜ್ಞರ ಸಮಿತಿಯೊಂದಿಗೆ ಚರ್ಚಿಸಿದರು, ಆದರೆ ಅದರಲ್ಲಿ ಈ ವಿಷಯದ ನಿರ್ಣಾಯಕ ಭಾಗವನ್ನು ಚರ್ಚೆಯಲ್ಲಿ ತರಲಿಲ್ಲ ಮತ್ತು ಈ ಹಗರಣದಲ್ಲಿ ಕೇಳಿಬಂದ ಹೆಸರುಗಳನ್ನು ತೆಗೆದುಕೊಳ್ಳದೇ ಜಾಣತನ ಪ್ರದರ್ಶಿಸಿದರು. ರಾಡಿಯಾ ಟೇಪ್ಸ್ ಹಗರಣ ನೋಡಿದರೆ ದೇಶದಲ್ಲಿನ ಮಾಧ್ಯಮ ಚಿತ್ರಣವು ನೆಗ್ಗು ಬಿದ್ದಂತೆ ಕಂಡುಬರುತ್ತದೆ. "ಸಂಪೂರ್ಣ ಪ್ರಸಾರ ಮಾಧ್ಯಮ ಮತ್ತು ಹೆಚ್ಚಿನ ಇಂಗ್ಲೀಷ್ ಸುದ್ದಿಪತ್ರಿಕೆಗಳಿಂದ ನೀರಾ ರಾಡಿಯಾ ಸುದ್ದಿಯ ಪ್ರಸಾರ ನಿಷೇಧ ಮಾಡಿದರೆ ದೇಶದಲ್ಲಿನ ನಿಜವಾದ ಭ್ರಷ್ಟಾಚಾರ ಚಿತ್ರಣವನ್ನು ಚಿತ್ರಿಸಿದಂತೆ ಎಂದು ಡೈಲಿ ನ್ಯೂಸ್ ಆ‍ಯ್‌೦ಡ್ ಅನಾಲಿಸಿಸ್ (ಡಿಎನ್‌ಎ) ಸುದ್ದಿಪತ್ರಿಕೆ ಯ ಉಪ ಸಂಪಾದಕ ಜಿ.ಸಂಪತ್ ಬರೆದಿದ್ದಾರೆ. ಇದಾದದ ನಂತರದಲ್ಲಿ ಇದೊಂದು ಅಂತರಾಷ್ಟ್ರೀಯ ಸುದ್ದಿಯಾಯಿತು, ಹೆಚ್ಚು ಹೆಚ್ಚು ಮಾಧ್ಯಮಗಳು ಇದನ್ನು ಚಿತ್ರಿಸಿದವು. ಕರಣ್ ಥಾಪರ್‌ Thaparರ ಸಿಎನ್‌ಎನ್-ಐಬಿಎನ್ ಸಂವಾದದಲ್ಲಿ, "ದ ಲಾಸ್ಟ್ ವರ್ಡ್" (ನವೆಂಬರ್ ೨೭, ೨೦೧೦) ರಾಡಿಯಾ ಟೇಪ್ಸ್ ಮತ್ತು ಭ್ರಷ್ಟಾಚಾರದಲ್ಲಿ ಪಾಲ್ಗೊಂಡ ಬರ್ಕಾ ದತ್ ಮತ್ತು ವೀರ್ ಸಾಂಘ್ವಿ ಕುರಿತಾಗಿ ಭಾರತೀಯ ಮುಖ್ಯವಾಹಿನಿಯಲ್ಲಿ ಮೊದಲ ಬಾರಿಗೆ ಶೋ ಪ್ರಸಾರವಾಯಿತು, ಹಾಗೆಯೇ ಈ ವಿಷಯ ಟಿವಿ ಸುದ್ದಿ ವಾಹಿನಿಯಲ್ಲಿ ಸುದ್ದಿಯ ಪ್ರಸಾರ ನಿಷೇಧ ಕೊನೆಯಾಯಿತು. ಸಣ್ಣದಾದ ಆದರೆ ಪ್ರಭಾವಿಯಾದ ಗುಂಪು ಪಾಲಿಸಿಯನ್ನು ಪ್ರಭಾವಗೊಳಿಸಲು ತಮ್ಮ ಸಂಪರ್ಕವನ್ನು ಬಳಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ತುಂಬಾ ಸಮಯದಿಂದ ಸಂಶಯಿಸಲಾಗುತ್ತಿತ್ತು ಮತ್ತು ಮಾಹಿತಿ ಹಸಿವಿನ ಪತ್ರಕರ್ತರು,ಲಾಬಿದಾರರು ಮತ್ತು ಉದ್ಯಮಿಗಳ ನಡುವಿನ ಸಂಬಂಧದ ಕುರಿತಾಗಿನ ಹರುಕು ಮುಸುಕನ್ನು ರಾಡಿಯಾ ಟೇಪ್ಸ್ ಪ್ರತಿಯೊಬ್ಬರ ಕಣ್ಣುಗಳನ್ನು ತೆರೆಸಿದೆ ಎಂದು ದಿ ಡೆಕ್ಕನ್ ಕ್ರೊನಿಕಲ್ ಅಭಿಪ್ರಾಯ ಪಟ್ಟಿದೆ. ದಿ ಟೈಮ್ಸ್ ಆಫ್ ಇಂಡಿಯಾದಿ ಟೈಮ್ಸ್ ಆಫ್‌ ಇಂಡಿಯಾ ನವೆಂಬರ್ ೨೫, ೨೦೧೦ರಂದು "ಯಾರು ಧಣಿಗಳು ಎಂಬುದನ್ನು ಜನರಿಗೆ ತೋರಿಸಿದೆ ಎಂದು ಹೇಳಿದೆ. ಅವರ ಕೈಯಲ್ಲಿನ ಆಯುಧ ಎಂದರೆ ಅಂತರಜಾಲ, ... ಕಾರ್ಪೊರೇಟ್ ಗುಂಪುಗಳ ಮತ್ತು ಉನ್ನತ ಸರ್ಕಾರಿ ರಾಜಕಾರಣಿಗಳ ರಹಸ್ಯ ಒಪ್ಪಂದದಲ್ಲಿನ ಪತ್ರಕರ್ತರಿಂದ "ಅಧಿಕಾರ ಮಧ್ಯವರ್ತಿ" ವಿರುದ್ಧ ಉದ್ರಿಕ್ತ ಕ್ರಿಯಾವಾದ ಕಂಡುಬಂದಿದೆ" ನವೆಂಬರ್ ೩೦ ೨೦೧೦ರಂದು ದಿಲೀಪ್ ಪಡ್ಗಾಂವಕರ್, ಸಂಜಯಾ ಬರು, ಸ್ವಪನ್ ದಾಸ್‌ಗುಪ್ತಾ ಮತ್ತು ಓಪನ್ ಮ್ಯಾಗಜೀನ್ ಸಂಪಾದಕ ಮನು ಜೋಸೆಫ್ಒಳಗೊಂಡ ತಜ್ಞ ಪತ್ರಕರ್ತರನ್ನು ಬರ್ಕಾ ದತ್ ಪ್ರಶ್ನಿಸಿದ ಒಂದು ಕಾರ್ಯಕ್ರಮವನ್ನು ಎನ್‌ಡಿಟಿವಿ ಇಂಡಿಯಾ ಪ್ರಸಾರ ಮಾಡಿತು. ತೃಪ್ತಿ ಲಾಹಿರಿ ಮತ್ತು ಶೈಲಜಾ ಬಾಜ್‌ಪೇಯಿ ಯವರು ಈ ಕಾರ್ಯಕ್ರಮದ ಒಂದು ಭಾಗವನನ್ನು ವಿಶ್ಲೇಷಿಸಿದಾಗ ಬರ್ಕಾ ಯಾವುದೆ ಅರ್ಥ ಪೂರ್ಣವಾದ ಚರ್ಚೆಯಾಗಲು ಅನುವು ಮಾಡಿಕೊಡಲಿಲ್ಲ ತುಂಬ ವಾದಮಾಡಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ನಂತರ ಬರ್ಕಾರ ಉತ್ತರಕ್ಕೆ ಮನು ಜೋಸೆಫ್ ತುಂಬಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ . ಡಿಸೆಂಬರ್ ೨ ೨೦೧೦ರ ನಂತರ ಹೆಡ್‌ಲೈನ್ಸ್ ಟುಡೆ ಇದೇ ರೀತಿಯಾದ ಕಾರ್ಯಕ್ರಮವನ್ನು ಆಯೋಜಿಸಿತ್ತು ,ಇದರಲ್ಲಿ ರಾಹುಲ್ ಕನ್ವಾಲ್, ಹೆಡ್‌ಲೈನ್ಸ್ ಟುಡೆಯ ಕಾರ್ಯಕಾರಿ ಸಂಪಾದಕರಿಂದ ವೀರ್ ಸಾಂಘ್ವಿ ಮತ್ತು ಪ್ರಭು ಚಾವ್ಲಾರನ್ನು ಅವರ ನಡತೆಯ ಕುರಿತಾಗಿ ಪ್ರಶ್ನಿಸಿದರು. ಆದರೆ ವೀರ್ ಸಾಂಘ್ವಿ ಬರ್ಕಾ ದತ್‌ರಂತೆ ತಜ್ಞರಿಂದ ಬಹುವಾಗಿ ಪ್ರಶ್ನೆ ಕೇಳಿ ಹಿಂಸೆಗೊಳಪಡಲಿಲ್ಲ, "ಮೂಲವನ್ನು ಉಜ್ಜಾಡಿದ್ದಕ್ಕಾಗಿ" ಅವರು ಕ್ಷಮೆಯಾಚಿಸಿದರು. == ಪ್ರತಿಭಟನೆಗಳು ಮತ್ತು ಬೆಳವಣಿಗೆಗಳು == ಏಪ್ರಿಲ್ ೨೦೧೦ರಂದು ದಿ ಪಯೋನಿಯರ್ "ಟ್ಯಾಪ್ಡ್ ಆ‍ಯ್‌೦ಡ್ ಟ್ರ್ಯಾಪ್ಡ್" ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ ವರದಿಗಾಗಿ ನೀರಾ ರಾಡಿಯಾ ನ್ಯಾಯಪೂರ್ವಕ ನೋಟೀಸ್ ಜಾರಿ ಮಾಡಿದ್ದಾರೆ. ದಿ ಪಯೋನಿಯರ್ '​ ದೂರ ಸಂಪರ್ಕ ಚಾಲನೆ ಮಾಡಲು ೨ಜಿ ಸ್ಪೆಕ್ಟ್ರಮ್ ವಿತರಣೆ ಮಾಡುವಲ್ಲಿ ಭ್ರಷ್ಟಾಚಾರ ಮತ್ತು ಕೈವಾಡ ಸಂಬಂಧಿಸಿದ ವರದಿ ಮಾಡಿರುವುದು, ದೂರ ಸಂಪರ್ಕ ಸಚಿವ ಎ.ರಾಜಾ ಜೊತೆಗಿನ ರಾಡಿಯಾ ಸಂಪರ್ಕಕ್ಕಗಿ ಶಿಫಾರಸ್ಸು ಮಾಡಿರುವ ವರದಿಯು "ಸಂಪೂರ್ಣವಾಗಿ ಸುಳ್ಳು, ಆಧಾರರಹಿತ ಮತ್ತು ಹಗೆತನದಿಂದ ಕೂಡಿದ್ದು ಮತ್ತು ಮಾನನಷ್ಟ ಉಂಟುಮಾಡಿದೆ" ಎಂದು ನೋಟಿಸ್ ಹೇಳಿದೆ. ಪ್ರಧಾನ ಪತ್ರಕರ್ತರು ಮತ್ತು ಇತರರು ಆರೋಪವನ್ನು ಅಲ್ಲಗಳೆದಿದ್ದಾರೆ. ಧ್ವನಿಮುದ್ರಣದಲ್ಲಿ ಅವರ ಮಾತುಕತೆಗಳು ಕಂಡುಬಂದಿದೆ ಎಂದುಓಪನ್ ಮ್ಯಾಗಜೀನ್ ಸಮರ್ಥಿಸಿಕೊಂಡಿದೆ. ದತ್ ತನ್ನ ಟ್ವಿಟ್ಟರ್ ಖಾತೆಯ ಮೂಲಕ ವಿವರಿಸಿದ್ದಾರೆ: ನಾನು ಎಂದು ಬೇಟಿಯಾಗದ (ರಾಜಾ)ವ್ಯಕ್ತಿಗೆ ಬೆಂಬಲ ನೀಡಿದ್ದೆನೆ ಎಂದು ಆರೋಪಿಸಲಾಗುತ್ತಿರುವುದು ವಿಲಕ್ಷಣ ವ್ಯಂಗ, ಮತ್ತು ನಾನು ಯಾವಾಗಲೂ ಮುದ್ರಣ ಮತ್ತು ಟಿವಿ ಮಾಧ್ಯಮದಲ್ಲಿ ದಾಳಿ ನಡೆಸಿದ್ದೆನೆ ಶುಭರಾತ್ರಿ! ನ್ಯೂ ಡೆಲ್ಲಿ ಟೆಲಿವಿಜನ್ ಲಿಮಿಟೆಡ್ ತನ್ನ ಜಾಲತಾಣದಲ್ಲಿ ಬರ್ಕಾ ಎ ರಾಜಾ ಪರವಾಗಿ ಲಾಬಿ ಮಾಡಿದ್ದಾರೆ ಎಂಬ ಪ್ರಚೋದಿತ ಆರೋಪಣೆ "ರುಜುವಾತು ಮಾಡದ, ಆಧಾರರಹಿತ ಮತ್ತು ಮಾನನಷ್ಟಕರ" ಮತ್ತು ಓಪನ್ ಮ್ಯಾಗಜೀನ್ ವಿರುದ್ಧ ಹೆದರಿಸುವ ಕ್ರಮ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಹಿಂದೂಸ್ಥಾನ್ ಟೈಮ್ಸ್ ತನ್ನ ಜಾಲತಾಣದಲ್ಲಿ ಸಾಂಘ್ವಿಯವರ ಸ್ಪಷ್ಟೀಕರಣ ಉಲ್ಲೇಖಿಸಿದೆ, ಮತ್ತು ಈ ನಕಲುಗಳು ಪ್ರಾಮಾಣಿಕವಾದ್ದದ್ದೆಂದು ಖಚಿತವಾಗಿಲ್ಲ ಎಂದು ಹೇಳಿದೆ. ೨೬ ನವೆಂಬರ್ ೨೦೧೦ರಂದು, ಬರ್ಕಾ ದತ್ ಟೇಪ್ ಕುರಿತು ಎದ್ದಿರುವ ಪ್ರಶ್ನೆಯ ಅಭಿಪ್ರಾಯಕ್ಕೆ ಒಂದು ಹೇಳಿಕೆ ನೀಡಿದರು, ಇವರ ಹಕ್ಕುಕೋರಿಕೆಯನ್ನು ಸಂಪಾದಿಸಲಾಗಿದೆ. ೨೭ ನವೆಂಬರ್ ೨೦೧೦ರಂದು, ವೀರ್ ಸಾಂಘ್ವಿ ಒಂದು ಹೇಳಿಕೆ ಬಿಡುಗಡೆ ಮಾಡಿ ವಿವಾದಲ್ಲಿ ತಮ್ಮ ಪಾತ್ರದ ಕುರಿತಾಗಿ ಸ್ಪಷ್ಟೀಕರಣ ನೀಡಿದರು. ೩೦ ನವೆಂಬರ್, ೨೦೧೦ರಂದು, ಸುದ್ದಿಪತ್ರಿಕೆ ತಜ್ಞರು ಮತ್ತು ಓಪನ್ ಮ್ಯಾಗಜೀನ್ ಸಂಪಾದಕ ಮನು ಜೋಸೆಫ್ ಒಳಗೊಂಡಂತೆ ಮ್ಯಾಗಜೀನ್ ಸಂಪಾದಕರೊಂದಿಗೆ ತಮ್ಮ ವಿರುದ್ಧದ ಅರೋಪವನ್ನು ಚರ್ಚಿಸಿದ್ದನ್ನು ಪರಿಷ್ಕರಿಸದೆ ಎನ್‌ಡಿಟಿವಿ ಪ್ರಸಾರ ಮಾಡಿತು,ಓಪನ್ ಮ್ಯಾಗಜೀನ್ ಮೊದಲಿಗೆ ರಾಡಿಯಾ ಟೇಪ್ಸ್ ಮತ್ತು ನಕಲಿಗಳನ್ನು ಪ್ರಕಟಿಸಿತ್ತು . ೧೯ ಡಿಸೆಂಬರ್, ೨೦೧೦ರಂದು, ಭಾರತೀಯ ಉದ್ಯಮ ಒಕ್ಕೂಟ(ಸಿಐಐ‌)ದ ಮಾಜಿ ಮುಖ್ಯಸ್ಥ ತರುಣ್ ದಾಸ್ ಸಿಎನ್‌ಎನ್-ಐಬಿಎನ್‌ನಲ್ಲಿ ಪ್ರಸಾರವಾಗುವ ಕರಣ್ ಥಾಪರ್‌ರ "ಡೆವಿಲ್ಸ್ ಅಡ್ವೋಕೇಟ್" ಕಾರ್ಯಕ್ರಮವು ಯಾವುದೇ ಕಾನುನೂ ಬಾಹಿರ ಚಟುವಟಿಕೆ ಅಲ್ಲ ಎಂಬುದನ್ನು ನಿರಾಕರಿಸುತ್ತಾರೆ. ರಾಡಿಯಾರ ಮೂಲ ಟೇಪ್‌ಗಳನ್ನು ಎ ರಾಜಾ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಅರ್ಜಿಯೊಂದಿಗೆ ಸೇರಿಸಲಾಗಿದೆ. ಭಾರತದಲ್ಲಿ ಪ್ರತಿಪಕ್ಷಗಳು ೨ಜಿ ಸ್ಪೆಕ್ಟ್ರಮ್ ಹಗರಣದ ತನಿಖೆ ನಡೆಸಲು ಮತ್ತು ರಾಡಿಯಾ ಟೇಪ್ಸ್ ಹಗರಣದಲ್ಲಿ ಮಾಧ್ಯಮಗಳ ಪಾತ್ರವನ್ನು ಖಚಿತ ಪಡಿಸಿಕೊಳ್ಳಲು ಕೂಡ ತನಿಖೆ ನಡೆಸಲು ಜಂಟಿ ಸಂಸತ್ ಮಂಡಳಿ (ಜೆಪಿಸಿ) ರಚಿಸಲು ಬೇಡಿಕೆ ಇಟ್ಟಿವೆ. ಜಂಟಿ ಸಂಸತ್ ಮಂಡಳಿ (ಜೆಪಿಸಿ) ತನಿಖೆ ನಡೆಸಲು ಬೇಡಿಕೆ ಇಟ್ಟಿರುವುದರಿಂದ ಸಂಸತ್ ನಡವಳಿಕೆಗಳು ಸಂಪೂರ್ಣವಾಗಿ ನಿಂತುಹೋಗಿವೆ,ಇದು ಸ್ವತಂತ್ರ ಭಾರತದಲ್ಲಿ ತುಂಬಾ ದೀರ್ಘವಾದ ಈ ರೀತಿಯ ಅವಧಿಯಾಗಿದೆ- ಲೋಕ ಸಭಾ ಮತ್ತು ರಾಜ್ಯ ಸಭಾ ೨೨ ಕೆಲಸದ ದಿನಗಳು ನಿಂತು ಹೋಗಿವೆ ರಾಡಿಯಾ ಟೇಪ್ಸ್‌ನ ಸುಮಾರು ೨೦೦೦ ತಾಸುಗಳ ಧ್ವನಿಮುದ್ರಣದಲ್ಲಿ ೧೦ ತಾಸು ಸಂಭಾಷಣೆಯನ್ನು ಅಯ್ಕೆಮಾಡಿ ಬಿಡುಗಡೆ ಮಾಡಿರುವುದನ್ನು ಸರ್ಕಾರ ಕೂಡ ಆರೋಪಿಸಿದೆ. ನವೆಂಬರ್ ೨೨ ೨೦೧೦ರಂದು ೨ಜಿ ಸ್ಪೆಕ್ಟ್ರಮ್ ಹಂಚಿಕೆ ಕೇಸಿನಲ್ಲಿ ಸಿಬಿಐ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡೆವಿಟ್‌ದಲ್ಲಿ ರಾಡಿಯಾ ಸರಿಯಾದ ಸಮಯದಲ್ಲಿ ತನಿಖೆಗಾಗಿ ಪ್ರಸ್ತಾವಿಸಬಹುದು, ಮತ್ತು ತನಿಖೆಯು ಮಾರ್ಚ್ ೨೦೧೧ರ ವರೆಗೆ ಸಂಪೂರ್ಣವಾಗಿ ಮುಗಿಯಬಹುದು ಎಂದು ಹೇಳಿದೆ. ೨೪ ನವೆಂಬರ್ ೨೦೧೦ರಂದು ನೀರಾ ರಾಡಿಯಾರನ್ನು ಎನ್‌ಫೋರ್ಸ್‌ಮೆಂಟ್ ಡೈರೆಕ್ಟೊರೇಟ್ () ಅಧಿಕಾರಿಗಳು ಪ್ರಶ್ನಿಸಿದರು ಮತ್ತು ೨ಜಿ ಹಗರಣದಲ್ಲಿ ಅವರ ಪಾತ್ರದ ಕುರಿತ ಹೇಳಿಕೆಗಳನ್ನು ಮುದ್ರಿಸಿಕೊಳ್ಳಲಾಯಿತು. ತನಿಖೆಗಾಗಿನ ದೂರವಾಣಿ ಮಾತುಕತೆ ಸೋರಿಕೆಯಾದ್ದರ ವಿರುದ್ಧ " ಇದರಲ್ಲಿ ಕೆಲವೊಂದು ಅನಿವಾರ್ಯ" ಎಂದು ಗೃಹ ಸಚಿವ ಪಿ.ಚಿದಂಬರಂ ತಮ್ಮ ಹೇಳಿಕೆ ನೀಡಿದರು ನವೆಂಬರ್ ೨೦೧೦ರಲ್ಲಿ ಟಾಟಾ ಗ್ರೂಪ್‌‌ನ ರತನ್ ಟಾಟಾ ಕಾರ್ಪೊರೇಟ್ ಲಾಬಿಗಾರ್ತಿ ನೀರಾ ರಾಡಿಯಾ ಜೊತೆಗಿನ ತಮ್ಮ ಖಾಸಗಿ ಸಂಭಾಷಣೆಗಳ ಸೋರಿಕೆ ಕುರಿತಾಗಿ ಸರ್ಕಾರಕ್ಕೆ ಮಾರ್ಗದರ್ಶನ ನೀಡಬೇಕು ಮತ್ತು ಪ್ರಕಟಣೆಗಳನ್ನು ತಡೆಯಬೇಕು ಎಂದು ಭಾರತೀಯ ಸರ್ವೋಚ್ಛ ನ್ಯಾಯಾಲಯಕ್ಕೆ ಹೋಗುವುದಾಗಿ ಹೇಳಿದ್ದಾರೆ. ರತನ್ ಟಾಟಾ ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿರುವುದನ್ನು ಸಮರ್ಥಿಸಿಕೊಂಡಿರುವುದನ್ನು ಔಟ್‌ಲುಕ್ ಮತ್ತು ಓಪನ್ ಎಂಬ ಎರಡು ಮ್ಯಾಗಜೀನಗಳು ಆಕ್ಷೇಪಿಸಿ ಲೇಖನ ಪ್ರಕಟಿಸಿದ್ದು ಇದೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂಬ ಮುಸುಕಿನೊಳಗೆ ಖಾಸಗಿ ಹಿತಾಸಕ್ತಿ ಅರ್ಜಿಯಾಗಿದೆ ಎಂದು ವಾದ ಮಾಡಿವೆ. ೧೪ ಡಿಸೆಂಬರ್, ೨೦೧೦ ರಂದು ಉದ್ಯಮಿ ರತನ್ ಟಾಟಾ ಅವರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ವ್ಯಾಜ್ಯ ಮಂಡಳಿಯು (ಸಿಪಿಐಎಲ್) ಎನ್‌ಜಿಒ ಒಂದು ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ಪ್ರಶಾಂತ್ ಭೂಷಣ್ ಮೂಲಕ ಸಲ್ಲಿಸಿದ್ದು, ಅದರ ಪ್ರಕಾರ "ಸರ್ವೋಚ್ಛ ನ್ಯಾಯಾಲಯ ವು ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಅಧಿಕೄತವಾಗಿ ಸಾರ್ವಜನಿಕರಿಂದ ಮುಚ್ಚಿಟ್ಟಿರುವ ಅಥವಾ ಮುಚ್ಚಿಡಲಾಗುವ ಇಂತಹ ಆಂತರಿಕವಾದ ಕುತಂತ್ರಗಳನ್ನು, ಇನ್ನು ಮುಂದೆ ಗುಟ್ಟು ಮಾಡಲಾಗದಂತೆ ತೆರೆದಿಡಲು ನಿರ್ಣಯ ಕೈಗೊಳ್ಳಬೇಕೆಂದು ಮತ್ತು ಸರ್ಕಾರವು ತನ್ನ ನಿರ್ಧಾರಗಳನ್ನು ಮತ್ತು ನೀತಿಗಳನ್ನು ವೈಯಕ್ತಿಕ ವಾಣಿಜ್ಯಿಕ ಆಸಕ್ತಿಗಳಿಗಾಗಿ ಮಾಡುವುದನ್ನು ಸಂಪೂರ್ಣವಾಗಿ ನಿವಾರಿಸಬೇಕು". ಅಲ್ಲದೇ ಇದು ನ್ಯಾಯಾಲಯಕ್ಕೆ ತನ್ನ ಬಳಿ ಇರುವ ಎಲ್ಲಾ ರಾಡಿಯಾ ಟೇಪ್‌ಗಳನ್ನೂ ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕೆಂದು ಕೋರಿಕೊಂಡಿತು. ಉನ್ನತ ಸ್ಥಾನದಲ್ಲಿರುವ ಲಾಬಿಗಾರರು ಮಾಧ್ಯಮದಲ್ಲಿ ಬರುವ ಸುದ್ದಿಯನ್ನು ಬದಲಾಯಿಸುವ ಮೂಲಕ ತಮ್ಮ ಹಿತಾಸಕ್ತಿಯನ್ನು ಬೆಳೆಸಿಕೊಳ್ಳಲು ಮಾಡಿರುವ ಪ್ರಯತ್ನವು ಈ ದೂರವಾಣಿ ಸಂಭಾಷಣೆಗಳಲ್ಲಿರುವುದನ್ನು ಕೇಳಿದ ಸೌತ್ ಏಷಿಯನ್ ಮೀಡಿಯಾ ಕಮಿಷನ್ 2010-09-23 ವೇಬ್ಯಾಕ್ ಮೆಷಿನ್ ನಲ್ಲಿ. ಅಚ್ಚರಿ ಮತ್ತು ದುಃಖ ವ್ಯಕ್ತಪಡಿಸಿದ್ದು ಸಂಭಾಷಣೆಗಳಲ್ಲಿ ಸಿಕ್ಕಿಬಿದ್ದ ಪತ್ರಕರ್ತರಿಗೆ ಪಶ್ಚಾತ್ತಾಪ ಪಡಲು ಹೇಳಿದೆ. "ಇದರಲ್ಲಿ ಪ್ರಮುಖವಾಗಿ ಚಿಂತೆಗೀಡು ಮಾಡುವ ಸಂಗತಿಯೆಂದರೆ ಸರ್ಕಾರದ ನಿರ್ಧಾರಗಳನ್ನು ಮಾಡಲು ಮತ್ತು ಕೇಂದ್ರ ಕ್ಯಾಬಿನೆಟ್ ಮಂತ್ರಿಗಳನ್ನು ಆಯ್ಕೆ ಮಾಡುವಂತಹ ಅತ್ಯಂತ ಮಹತ್ವದ ಸಂಗತಿಗಳಲ್ಲಿ ಮಾಧ್ಯಮದವರನ್ನು ಬಳಸಿಕೊಂಡಿದ್ದು ," ಎಂದು ತನ್ನ ಹೇಳಿಕೆಯಲ್ಲಿ ಈ ಆಯೋಗದ ಭಾರತೀಯ ವಿಭಾಗ ಹೇಳಿದೆ. ಭಾರತೀಯ ಸರ್ವೋಚ್ಛ ನ್ಯಾಯಾಲಯದಲ್ಲಿ ೮ನೇ ಜನವರಿ ೨೦೧೧ ರಂದು ಸಲ್ಲಿಸಿದ ಅಫಿಡವಿಟ್‌ನಲ್ಲಿ ರತನ್ ಟಾಟಾ ಅವರು, ತಾವು ಡಿಸೆಂಬರ್ ೨೦೧೦ ರಲ್ಲಿ ಸಲ್ಲಿಸಿದ ರಿಟ್ ಅರ್ಜಿಯ ಉದ್ದೇಶ ಕೇವಲ ತಮ್ಮ ಮತ್ತು ರಾಡಿಯಾ ನಡುವಿನ ಸಂಭಾಷಣೆಯನ್ನು ಸಾರ್ವಜನಿಕವಾಗಿ ಮಾಧ್ಯಮವು ಬಿತ್ತರಿಸುವುದನ್ನು ಅಥವಾ ಪ್ರಕಟಿಸುವುದನ್ನು ತಡೆಯುವುದು ಮಾತ್ರವಲ್ಲ, ಅದನ್ನು ವಿವೇಚನೆಯಿಲ್ಲದೇ ಪ್ರಕಟಿಸುವ ಮೂಲಕ "ಬಹಳಷ್ಟು ಜನರ ಸಂವಿಧಾನಿಕ ಹಕ್ಕುಗಳನ್ನು ಹೀಗೆ ಒಟ್ಟಾರೆಯಾಗಿ ಭಂಗ ಮಾಡುವುದನ್ನು ತಡೆಯುವುದಾಗಿದೆ" ಎಂದು ಹೇಳಿದರು. ಟಾಟಾ ಅವರ ಅಫಿಡೆವಿಟ್‌ನಲ್ಲಿ ದೊಡ್ಡ ಕಾರ್ಪೋರೇಟ್ ಕಂಪನಿಗಳು ಮಾಧ್ಯಮ ಗುಂಪುಗಳಲ್ಲಿ ಗಮನಾರ್ಹ ಹಿತಾಸಕ್ತಿಗಳನ್ನು ಹೊಂದಿದ್ದು, ಇದರಿಂದಾಗಿ ಈ ರೀತಿಯ "ಸಂಭಾವ್ಯ ಸಂಘರ್ಷ" ಉಂಟಾಗಿದೆ ಎಂದು ಸಹಾ ಹೇಳಲಾಗಿದೆ. ಅನಿಲ್ ಅಂಬಾನಿ ಗ್ರೂಪ್ ನ ಭಾಗವಾದ ರಿಲಯನ್ಸ್ ಕ್ಯಾಪಿಟಲ್ ಇಂಡಿಯಾ ಟುಡೆ ಗ್ರೂಪ್‌ಗೆ ಸಂಬಂಧಿಸಿದ ಟಿವಿ ಟುಡೆ ನೆಟ್‌ವರ್ಕ್ಸ್‌ನಲ್ಲಿ ೧೦% ಮಾಲೀಕತ್ವ ಹೊಂದಿದೆ. ಆರ್‌ಪಿಜಿ ಮತ್ತು ಮುಂಬಯಿ ಮೂಲದ ರಾಜನ್ ರಹೇಜಾ ಗ್ರೂಪ್ ಓಪನ್ ಮತ್ತು ಔಟ್‌ಲುಕ್ಗಳ ಮಾಲೀಕತ್ವವನ್ನು ಹೊಂದಿದ್ದು, ಅವುಗಳೇ ಹೆಚ್ಚಾಗಿ ರಾಡಿಯಾ ಟೇಪ್‌ಗಳ ಮಾಹಿತಿಗಳನ್ನು ಪ್ರಕಟಿಸಿವೆ. ಈ ಎರಡೂ ಮ್ಯಾಗಜೀನ್‌ಗಳು ಟಾಟಾ ರಿಟ್ ಅರ್ಜಿಯ ವಿರುದ್ಧ ಭಾರತೀಯ ಸರ್ವೋಚ್ಛ ನ್ಯಾಯಾಲಯದಲ್ಲಿ ವಾದಿಸುತ್ತಿವೆ. == ತನಿಖೆಗಳು == ನವೆಂಬರ್ ೨೦೧೦ರಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಭಾರತೀಯ ಸರ್ವೋಚ್ಛ ನ್ಯಾಯಾಲಯಕ್ಕೆ ಹೇಳಿಕೆ ನೀಡಿ, ೨ಜಿ ಸ್ಪೆಕ್ಟ್ರಮ್ ಹಗರಣದಲ್ಲಿ ನೀರಾ ರಾಡಿಯಾ ಕೈವಾಡವನ್ನು ಆಳವಾಗಿ ವಿಚಾರಣೆ ಮಾಡಲಾಗುವುದು, ಏಕೆಂದರೆ ಇದರಲ್ಲಿ ನಡೆಯಲಾಗಿರುವ ಅಕ್ರಮಗಳು "ಅತ್ಯಂತ ಬೃಹತ್ ಗಾತ್ರ"ದವಾಗಿದ್ದು, ಅವು ವಿದೇಶಕ್ಕೂ ಚಾಚಿಕೊಂಡಿವೆ. ನವೆಂಬರ್ ೨೦೧೦ರಂದು ಸಿಬಿಐ ಸರ್ವೋಚ್ಛ ನ್ಯಾಯಾಲಯಕ್ಕೆ ಏಳು ಪುಟಗಳ ಅಫಿಡೆವಿಟ್‌ ಸಲ್ಲಿಸಿ, ಮಾರ್ಚ್ ೨೦೧೧ರೊಳಗಡೆ ೨ಜಿ ಸ್ಪೆಕ್ಟ್ರಮ್ ತನಿಖೆ ಸಂಪೂರ್ಣವಾಗಿ ಮುಗಿಯುವುದು ಎಂದು ಹೇಳಿತು ಮತ್ತು ನೀರಾ ರಾಡಿಯಾರಿಗೆ ಸಂಬಂಧಿಸಿದ ನಕಲಿಗಳನ್ನು ೫,೮೫೧ ದೂರವಾಣಿ ಕರೆಗಳನ್ನು ಮತ್ತು ೮೨,೬೬೫ ದಾಖಲೆ ಪತ್ರಗಳನ್ನು ಪರೀಕ್ಷೆಗೊಳಪಡಿಸಿತು. ಭಾರತೀಯ ಎನ್‌ಫೋರ್ಸ್‌ಮೆಂಟ್ ಡೈರೆಕ್ಟೊರೇಟ್‌ (ಇಡಿ)ನೀರಾ ರಾಡಿಯಾರನ್ನು ಹಾಜರಾಗುವಂತೆ ಆದೇಶಿಸಿತು ಮತ್ತು ೨೪ ನವೆಂಬರ್ ೨೦೧೦ರಂದು ಎಂಟು ಗಂಟೆಗಿಂತ ಹೆಚ್ಚಿಗೆ ಕಾಲ ಪ್ರಶ್ನಿಸಿತು, ಇದು ತನಿಖಾದಳದಿಂದ ನಡೆದ ರಾಡಿಯಾರ ಮೊದಲ ವಿಚಾರಣೆಯಾಗಿತ್ತು. ಇಡಿ ಮೊದಲಿಗೆ ನೀಡಿದ ಸಮನ್ಸ್‌ಗೆ ಅನಾರೋಗ್ಯದ ಕಾರಣದಿಂದಾಗಿ ತಪ್ಪಿಸಿಕೊಂಡಿದ್ದರು. ಜಾರ್ಖಂಡ್‌ನ ಮಾಜಿ (ಅಪರಾಧಿ) ಮುಖ್ಯಮಂತ್ರಿ ಮಧು ಕೋಡಾರ ಗಣಿ ಡೀಲ್‌ಗೆ ನೀರಾ ರಾಡಿಯಾ ಮಧ್ಯವರ್ತಿಯಾಗಿದ್ದರು ಎಂದು ಸಿಬಿಐ ಇನ್ನೊಂದು ತನಿಖೆಯಲ್ಲಿ ಬಹಿರಂಗ ಪಡಿಸಿತು. ಸಂಸತ್ ಕಾರ್ಪೋರೇಟ್‌ನಿಂದ ಮತ್ತೆ ಗಣಿ ಭೋಗ್ಯ ಹೆಚ್ಚಿಸಿಕೊಳ್ಳಲು ೧೮೦ ಕೋಟಿ ರೂಪಾಯಿಗಳನ್ನು ನೀಡಿರುವುದಾಗಿ ಕೋಡಾ ದೂರಿದ್ದಾರೆ. ೨ಜಿ ಸ್ಪೆಕ್ಟ್ರಮ್ ಹಂಚಿಕೆ ಕುರಿತಾಗಿ ಡಿಸೆಂಬರ್ ೮, ೨೦೧೦ರಂದು ಸಿಬಿಐ, ದೆಹಲಿ ಮತ್ತು ತಮಿಳುನಾಡಿನ ಚೆನ್ನೈಯ ಎ.ರಾಜಾರಿಗೆ ಅವರ ಸಂಬಂಧಿಕರಿಗೆ ಮತ್ತು ಸಹಾಯಕರಿಗೆ ಸಂಬಂಧಿಸಿದ ೧೪ ಮನೆಗಳ ಮೇಲೆ ದಾಳಿ ನಡೆಸಿತು. ಡಿಸೆಂಬರ್ ೧೫, ೨೦೧೦ರಂದು ಸಿಬಿಐ ಹೆಚ್ಚಿನ ತನಿಖೆಗಾಗಿ ದೆಹಲಿ ಮತ್ತು ತಮಿಳು ನಾಡಿನ ಚೆನ್ನೈಯಲ್ಲಿ ವಿವಿಧ ಮನೆಗಳ ಮೇಲೆ ದಾಳಿ ನಡೆಸಿತು. ಇದೇ ಸಮಯದಲ್ಲಿ, ೨ಜಿ ಸ್ಪೆಕ್ಟ್ರಮ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಲಾಬಿಗಾರ್ತಿ ನೀರಾ ರಾಡಿಯಾ, ಮಾಜಿ ದೂರಸಂಪರ್ಕ ನಿಯಂತ್ರಣದ(ಟ್ರಾಯ್) ಅಧ್ಯಕ್ಷ ಪ್ರದೀಪ್ ಬೈಜಲ್ ಮತ್ತು ಮಾಜಿ ದೂರಸಂಪರ್ಕ ಸಚಿವ ಎ.ರಾಜಾರ ಸಂಬಂಧಿಗಳ ಮನೆ ಮತ್ತು ಕಛೇರಿಯ ಮೇಲೆ ದಾಳಿ ನಡೆಸಿತು. ಸಿಬಿಐ ನೀರಾ ರಾಡಿಯಾರನ್ನು ವಿಚಾರಣೆಗೊಳಪಡಿಸುತ್ತು. ತಮಿಳು ನಾಡಿನಲ್ಲಿ ನಡೆದ ದಾಳಿಯು ಎ.ರಾಜಾರ ಆಡಿಟರ್ ಮತ್ತು ಎ.ರಾಜಾ ಪಕ್ಷ ಡಿಎಂಕೆಗೆ ಸಮೀಪವರ್ತಿ ಪತ್ರಕರ್ತ ಕಾಮರಾಜ್, ಕಾಮರಾಜ್‌ ಹೆಂಡತಿ ಜಯಸುಧಾ ನೀರಾ ರಾಡಿಯಾ ಒಡೆತನದ ವೈಷ್ಣವಿ ಕಮ್ಯೂನಿಕೇಶನ್ಸ್ ಕಚೇರಿಯ ಹಿರಿಯ ಅಧಿಕಾರಿ ಇವರು ಕೂಡ ಒಳಗೊಂಡಿತ್ತು. ಎ.ರಾಜಾರ ಸಹೋದರ ರಾಮಚಂದ್ರನ್, ಪೆರಿಯಾರ್ ನಗರ, ತಿರುಚ್ಚಿ ಮತ್ತು ಚೆನ್ನೈನಲ್ಲಿರುವ ಕಛೇರಿಯ ಮೇಲು ದಾಳಿ ನಡೆಯಿತು, ರಾಜ್ಯ ಸಭಾ ಎಂಪಿ ಮತ್ತು ಕರುಣಾನಿಧಿ ಪುತ್ರಿಯಾದ ಕನಿಮೋಳಿ ಯಿಂದ ಅನುಗ್ರಹ ಪಡೆದಿದ್ದರು, ಕನಿಮೋಳಿ ಎ.ರಾಜಾರಿಗೆ ದೃಢವಾದ ಬೆಂಬಲಿಗರಾಗಿದ್ದರು. ನೀರಾ ರಾಡಿಯಾರ ಮನೆಯ ಮೇಲೆ ದಾಳಿ ನಡೆಸಿ ಸಿಬಿಐ ತನಿಖೆ ಮಾಡಿದ ದಾಖಲೆಗಳು ಮತ್ತು ಗೂಢಾರ್ಥ ಮಾಹಿತಿಗಳು ಸಂಗ್ರಹವಾದ ಒಂದು ಡಜನ್‌ಗಿಂತ ಹೆಚ್ಚು ಕಂಪ್ಯೂಟರ್‌ಗಳನ್ನು ವಶಪಡಿಸಿಕೊಂಡಿತು. ಸಿಬಿಐ ತಾನು ಜಪ್ತಿ ಮಾಡಿದ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳ ಹಾರ್ಡ್ ಡಿಸ್ಕ್ ಡ್ರೈವ್‌ಗಳಲ್ಲಿ ಸಂಗ್ರಹವಾದ ಮಾಹಿತಿಯನ್ನು ಪತ್ತೆಹಚ್ಚಲು ಫೋರೆನ್ಸಿಕ್ ಸರ್ವೀಸಸ್ ಲ್ಯಾಬ್‌ನ ಸಹಾಯ ತೆಗೆದುಕೊಂಡಿತು. ಚೆನ್ನೈ ಮತ್ತು ದೆಹಲಿಯಲ್ಲಿ ವಶಪಡಿಸಿಕೊಂಡಿರುವ ಬೃಹತ್ ಗಾತ್ರದ ದಾಖಲೆಗಳನ್ನು ಸಹಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಡಿಸೆಂಬರ್ ೧೬, ೨೦೧೦ರಂದು ಭಾರತೀಯ ಸರ್ವೋಚ್ಛ ನ್ಯಾಯಾಲಯ ತಾನು ತನಿಖೆಯ ಮೇಲ್ವಿಚಾರಣೆ ನೋಡಿಕೊಳ್ಳುವುದಾಗಿ ಪ್ರಕಟಿಸಿತು ಮತ್ತು ಫೆಬ್ರವರಿ ೧೦, ೨೦೧೧ರ ಒಳಗಾಗಿ ಸಿಬಿಐ,ಇಡಿ ಮತ್ತು ವರಮಾನ ತೆರಿಗೆ ಇಲಾಖೆಗಳಿಗೆ ತಮ್ಮ ತನಿಖಾ ಸ್ಥಿತಿಯನ್ನು ಸಲ್ಲಿಸಬೇಕು ಎಂದು ಕೇಳಿಕೊಂಡಿತು. ೨೦೧೦ರ ಮಧ್ಯದಲ್ಲಿ ತನಿಖೆಯ ಮೇಲ್ವಿಚಾರಣೆ ನಡೆಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ವ್ಯಾಜ್ಯದ ಕೇಂದ್ರವನ್ನು ವಕೀಲರಾದ ಪ್ರಶಾಂತ್ ಭೂಷಣ್ ಪ್ರತಿನಿಧಿಸಿ ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸಿಬಿಐ ಭಾರತೀಯ ಅಪರಾಧ ನಡವಳಿ ಸಂಹಿತೆ ಪರಿಚ್ಛೇಧ ೧೬೦ರ ಪ್ರಕಾರ ಡಿಸೆಂಬರ್ ೨೦, ೨೦೧೦ರಂದು ಮಾಜಿ ದೂರಸಂಪರ್ಕ ಸಚಿವ ಎ.ರಾಜಾ ಮತ್ತು ಲಾಬಿಗಾರ್ತಿ ನೀರಾ ರಾಡಿಯಾರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಕಳುಹಿಸಿತ್ತು. ಸಿಬಿಐ ಭಾರತ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ನ ಮಾಜಿ ಅಧ್ಯಕ್ಷ ಪ್ರದೀಪ್ ಬೈಜಲ್‌ರನ್ನು ಕೂಡ ಅದೇ ದಿನ ವಿಚಾರಣೆಗೊಳಪಡಿಸಿತ್ತು. ನೋಟಿಸ್ ಪಡೆದ ನಂತರ ಎ.ರಾಜಾ ಆರೋಗ್ಯದ ಆಧಾರದ ಮೇಲೆ ಕೆಲವು ದಿನ ಅವಕಾಶವನ್ನು ಬೇಡಿಕೊಂಡರು, ಆದರೆ ನೀರಾ ರಾಡಿಯಾ ಡಿಸೆಂಬರ್ ೨೧, ೨೦೧೦ರಂದು ಸಿಬಿಐ ವಿಚಾರಣೆಗೆ ತವಾಗಿಯೇ ಲಭ್ಯವಿದ್ದರು. ಡಿಸೆಂಬರ್ ೨೧, ೨೦೧೦ರಂದು ಸಿಬಿಐ ನೀರಾ ರಾಡಿಯಾರನ್ನು ಅವರ ದೆಹಲಿ ನಿವಾಸದಲ್ಲಿಯೇ ವಿಚಾರಣೆಗೊಳ ಪಡಿಸಿತು. ಡಿಸೆಂಬರ್ ೨೪ ಮತ್ತು ಡಿಸೆಂಬರ್ ೨೫, ೨೦೧೦ರಂದು ಎ.ರಾಜಾರನ್ನು ಸಿಬಿಐ, ನವದೆಹಲಿಯಲ್ಲಿರುವ ಸಿಬಿಐ ಮುಖ್ಯ ಕಛೇರಿಯಲ್ಲಿ ತನಿಖೆಗೊಳಪಡಿಸಿತು. ಎ.ರಾಜಾರನ್ನು ತನಿಖೆ ಮಾಡುವಾಗ ರಾಡಿಯಾ ಟೇಪ್ಸ್ ಚಾಲನೆ ಮಾಡಲಾಯಿತು. ೨ಜಿ ಸ್ಪೆಕ್ಟ್ರಮ್ ಮತ್ತು ಮಾಜಿ ಸಚಿವ( ಎ.ರಾಜಾ) ದೂರಸಂಪರ್ಕ ಸಚಿವರಾಗಿದ್ದಾಗ ಇವರಿಗೆ ಹತ್ತಿರವಾಗಿರುವುದನ್ನು ಬಳಸಿಕೊಂಡು "ಕೊನೆ ಪಕ್ಷ ನಾಲ್ಕು ಕಂಪನಿಗಳಿಗೆ" ಅನುಮತಿ ಪಡೆಯಲು ಇವರೊಂದು ಸಾಧನವಾಗಿದ್ದರೆಂದು ಸಿಬಿಐ ನೀರಾ ರಾಡಿಯಾರನ್ನು ತನಿಖೆಗೊಳಪಡಿದಾಗ ತಿಳಿಸಿರುವುದಾಗಿ ಬಹಿರಂಗ ಪಡಿಸಿದೆ. ರಾಡಿಯಾರ ಸಂಸ್ಥೆಯೊಂದಿಗೆ ಒಪ್ಪಂದ ಹೊಂದಿದ್ದ ಮತ್ತು ರಾಡಿಯಾರ ಸಂಸ್ಥೆಯಿಂದ ವ್ಯಕ್ತಿಗಳಿಗೆ ಮತ್ತು ಕಾರ್ಪೊ್ರೇಟ್‌ಗಳ ನಡುವೆ ಹಣದ ಬದಲಾವಣೆ ಕುರಿತು ತನಿಖೆ ನಡೆಸಲು ವಿಶೇಷವಾದ ವಿಭಾಗವನ್ನು ತೆರೆಯಲಾಗಿದೆ ಎಂದು ಭಾರತೀಯ ವರಮಾನ ತೆರಿಗೆ ಇಲಾಖೆ ಪ್ರಕಟಿಸಿದೆ. == ಆಡಿಯೋ ಟೇಪ್‌ಗಳು == ಈ ಕೆಳಗಿನ ವೆಬ್ ಕೊಂಡಿಗಳು ಆಡಿಯೋ ಫೈಲ್ಸ್ ಮತ್ತು ಅನುರೂಪವಾಗಿರುವ ನಕಲಿಗಳನ್ನು ಹೊಂದಿವೆ. ಧ್ವನಿಮುದ್ರಿಸಲಾದ ಆಡಿಯೋ ಫೈಲ್‌ಗಳನ್ನು ದೂರವಾಣಿ ಕರೆಗಳಲ್ಲಿ ಚರ್ಚಿಸಿದ ವಿಷಯದ ಪ್ರಕಾರ ಗುಂಪುಗಳಾಗಿ ಮಾಡಲಾಗಿದೆ. ಔಟ್‌ಲುಕ್ಇಂಡಿಯಾದಲ್ಲಿ ರಾಡಿಯಾ ಟೇಪ್‌ ಹಗರಣಕ್ಕೆ ಸಂಬಂಧಿಸಿದ ಸಂಪೂರ್ಣ ಆಡಿಯೋ ಸಂಭಾಷಣೆಗಳ ಪಟ್ಟಿ. == ಉಲ್ಲೇಖಗಳು ==